Monday, May 7, 2012

ಸುಮ್ನೆ..ತಮಾಷೆಗೆ-1

 ಒಬ್ಬ ಉತ್ಸಾಹಿ, ಮಡಿವಂತ ಪತ್ರಕರ್ತನೊಬ್ಬ ಅರೇಬ ದೇಶಕ್ಕೆ ಹೋಗಿದ್ದ. ಅಲ್ಲಿ ಒಬ್ಬನನ್ನು ನಿಲ್ಲಿಸಿ 'ಈ ಊರಲ್ಲಿ ನಡೆದ ಯಾವುದಾದರೋ ಅದ್ಭುತವಾದ , ವಿಚಿತ್ರವಾದ ಘಟನೆ ಹೇಳು..?' ಎಂದ. ಅದಕ್ಕೆ ಆ ಅರಬ ಗಡ್ಡ ನೀವಿಕೊಳ್ಳುತ್ತಾ , 'ಇಲ್ಲಿ ಆ ತರಹದ್ದು ಏನೂ ನಡಿಯಲ್ಲ ಅನ್ಕೊಡಿದ್ದೀರಾ..? ಕೇಳಿ ಒಂದ್ಸಾರಿ ನಮ್ ಪಟೇಲರ ಕತ್ತೆ ಕಳೆದುಹೋಗಿತ್ತು ಸ್ವಾಮೀ..ನಾವೊಂದಷ್ಟು  ಜನ ಎಣ್ಣೆ ತು೦ಬಿಸ್ಕ೦ದು ಮರಳುಗಾಡಲ್ಲಿ ಹುಡುಕ್ತಾ ಹೊರಟ್ವೀ..ಕತ್ತೆಯೇನೋ ಸಿಕ್ತು.. ಆದ್ರೆ  .ರಾತ್ರಿಯಾಗಿತ್ತು..ಸರಿ ಇನ್ನೇನು ಮಾಡೋದು ಅಲ್ಲೇ ಮಲಗಿ ಬೆಳಿಗ್ಗೆ ಎದ್ದು ಹೋದ್ರಾಯ್ತು ಅಂತ ಅಲ್ಲಿ ಗುಂಡು ಹಾಕಿದ್ವಿ..ಗುಂಡು ಹಾಕಿದ ಮೇಲೆ ಏನೇನೋ ಬೇಕು ಅನ್ನಿಸ್ತು..ಉದ್ರೇಕ ತಡೀಲಾರದೆ ಒಬ್ಬರಾದ ಮೇಲೆ ಒಬ್ಬರಂತೆ ಕತ್ತೆನಾ ..' ಪತ್ರಕರ್ತ ಅವನನ್ನು ಅಷ್ಟಕ್ಕೇ ತಡಿದುಬಿಟ್ಟ..'ಥೂತ್ ಇದೆಂತಹ ಅಸಹ್ಯಾ..ಯಾವುದಾದರೂ ಶೃ೦ಗಾರಮಾಯವಾದ ಕೇಳೋದಿಕ್ಕೆ  ಮಜಾ ಅನ್ಸೋ ಘಟನೆ ಯಾವುದಾದರು ಇದ್ರೆ ಹೇಳು..' ಎಂದ .ಮತ್ತೆ ಆ ಅರಬ ಗಡ್ಡ ನೀವಿಕೊಳ್ಳುತ್ತಾ  'ಇಲ್ಲಿ ಆ ತರಹದ್ದು ಏನೂ ನಡಿಯಲ್ಲ ಅನ್ಕೊಡಿದ್ದೀರಾ..? ಕೇಳಿ ಒಂದ್ಸಾರಿ ನಮ್ ಪಟೇಲರ ಮಗಳು ಕಳೆದುಹೋಗಿದಳು  ಸ್ವಾಮೀ..ನಾವೊಂದಷ್ಟು  ಜನ ಎಣ್ಣೆ ತು೦ಬಿಸ್ಕ೦ದು ಮರಳುಗಾಡಲ್ಲಿ ಹುಡುಕ್ತಾ ಹೊರಟ್ವೀ..ಹುಡುಗಿಯೇನೋ ಸಿಕ್ತು.. ಆದ್ರೆ  .ರಾತ್ರಿಯಾಗಿತ್ತು..ಸರಿ ಇನ್ನೇನು ಮಾಡೋದು ಅಲ್ಲೇ ಮಲಗಿ ಬೆಳಿಗ್ಗೆ ಎದ್ದು ಹೋದ್ರಾಯ್ತು ಅಂತ ಅಲ್ಲಿ ಗುಂಡು ಹಾಕಿದ್ವಿ..ಗುಂಡು ಹಾಕಿದ ಮೇಲೆ ಏನೇನೋ ಬೇಕು ಅನ್ನಿಸ್ತು..ಉದ್ರೇಕ ತಡೀಲಾರದೆ ಒಬ್ಬರಾದ ಮೇಲೆ ಒಬ್ಬರಂತೆ ಆ ಹುಡುಗೀನಾ..' ಈಗ ಮತ್ತೆ ಹೌಹಾರಿದ ಪತ್ರಕರ್ತ ರೇಗಿಯೇಬಿಟ್ಟ. 'ಬಾಯಿ ಮುಚ್ಚಯ್ಯ ಸಾಕು..ದರಿದ್ರ..ಹಾಳಾಗೋಗ್ಲಿ..ಯಾವುದಾದರೂ ಕರುಣಾಜನಕವಾದ, ದುಃಖ ತರೋ ಘಟನೆಯಿದ್ರೆ ಹೇಳು..' ಎಂದ.ಆ ಮಾತು ಕೇಳಿದ ತಕ್ಷಣ ತುಂಬಾ ನೊ೦ದುಕೊ೦ಡ ಅರಬ ಅಳುತ್ತಲೇ ಹೇಳಲು ಪ್ರಾರಂಭಿಸಿದ..'ಒಂದ್ಸಾರಿ ನಾನೇ ಕಳೆದುಹೋಗಿದ್ದೆ ಮಾರಾಯಾ..'
***********************
 ಮೂರು ಹೊತ್ತು ಊಟ ಬಿಟ್ಟರೆ ಬೇರೇನೂ ಮಾಡದ ಉಂಡಾಡಿ ಗು೦ಡನಿಗೊಮ್ಮೆ ಕೆಲಸ ಮಾಡಬೇಕೆನ್ನಿಸಿ ಸರ್ಕಸ್ ಕಂಪನಿಗೆ ಹೋಗಿ ಕೆಲಸ ಕೇಳಿದ.ಅದರ ಮಾಲೀಕ ಇವನ ಆಳ್ತನ ನೋಡಿ 'ನಿನಗೆ ಕೆಲಸ ಕೊಟ್ಟರೆ ಏನು ಮಾಡಬಲ್ಲೆ ..? ಎಂದು ಕೇಳಿದ್ದಕ್ಕೆ 'ಸ್ವಾಮೀ ನನಗೆ ತಿನ್ನುವುದು ಬಿಟ್ಟರೆ ಬೇರೇನೂ ಬರುವುದಿಲ್ಲ..' ಎಂದು ವಿನಮ್ರವಾಗಿ ಉತ್ತರಿಸಿದ. 'ಸರಿ ಹಾಗಾದ್ರೆ ಒಂದ್ ಕೆಲಸ ಮಾಡು..ಸರ್ಕಸ್ಸಿನಲ್ಲಿ ನಿನ್ನದೆ ಒಂದು ಷೋ ಇರುತ್ತೆ..ಬರೀ ತಿನ್ನ ಬೇಕಷ್ಟೇ..' ಎಂದ. ಉಂಡಾಡಿ ಖುಷಿಯಿಂದ ಒಪ್ಪಿಕೊಂಡ.
ಮಾರನೆಯ ದಿನದಿಂದ ಉಂಡಾಡಿ ಗುಂಡನ ಬಕಾಸುರ ಷೋ ಭಾರೀ ಪ್ರಸಿದ್ಧವಾಯಿತು. ಒಬ್ಬ ಮನುಷ್ಯ ಇಷ್ಟನ್ನು ಒ೦ದು ಹೊತ್ತಿನಲ್ಲಿ ಹೇಗೆ ತಿನ್ನಲು ಸಾಧ್ಯ ..ಇಲ್ಲೇನೋ ಕಣ್ಕಟ್ಟಿದೆ ಎಂದು ಜನ ಮಾತಾಡಿಕೊಂಡು ಷೋ ನೋಡಲು ಬರುತ್ತಿದ್ದರು. ದಿನವೂ ಷೋ ಹೌಸ್ ಫುಲ್ ಆಗತೊಡಗಿತ್ತು. ದಿನಕ್ಕೊ೦ದೆ ಷೋ ಇದ್ದದ್ದು ಎರಡಾಯಿತು. ಜನರಿಗೆ ಆಶ್ಚರ್ಯ ! ಎರಡನೇ ಶೋನಲ್ಲೂ ಅಷ್ಟೇ ತಿ೦ತಾನಾ..? ಜನ ಪುನಃ ಪುನಃ ಬರತೊಡಗಿದರು. ಈಗ ದಿನಕ್ಕೆ ಷೋ ಮೂರಾಯಿತು. ಜನ ಇನ್ನೂ ಕಿಕ್ಕಿರಿದರು.ದಿನಕ್ಕೆ ನಾಲ್ಕಾಯಿತು. ಜನರಂತೂ ನಾಲ್ಕೂ ಶೋನಲ್ಲಿ ಒಬ್ಬನೇ ಅಷ್ಟೊಂದು ತಿನ್ನಲು ಹೇಗೆ ಸಾಧ್ಯ ಎಂದು ಯೋಚಿಸಿ ಯೋಚ್ಸಿ ನಿದ್ದೆ ಕಳೆದುಕೊಂಡರು.ಜನರ ಒತ್ತಾಯ ತಡಿಯಲಾರದೆ ಮಾಲೀಕ ದಿನಕ್ಕೆ ಐದು ಷೋ ಮಾಡಿದ. ಆಗ ಮಾಲೀಕನ ಹತ್ತಿರ ಬಂದ ಉಂಡಾಡಿ ತನ್ನ ರಾಜೀನಾಮೆ ಪತ್ರ ಕೊಟ್ಟ.
ಮಾಲೀಕ ಹೌಹಾರಿದೆ. ಈಗ ತನ್ನ ಸರ್ಕಸ್ಸು ಕಂಪನಿಯ ಬಹು ಮುಖ್ಯ ಐಟಮ್ ಅಂದ್ರೆ ಬಕಾಸುರ ಷೋ..
'ಯಾಕಪ್ಪ..ಸಂಬಳ ಕಮ್ಮಿಯಾಯ್ತಾ..ಯೋಚನೆ ಮಾಡಬೇಡ..ಈ ತಿಂಗಳಿಂದ ಡಬ್ಬಲ್ ಅಲ್ಲಾ ತ್ರಿಬ್ಬಲ್ ಮಾಡ್ತೀನಿ..ಕೆಲಸ ಮಾತ್ರ ಬಿಡಬೇಡ ' ಎಂಡು ಗೋಗೆರೆದ.
'ಸಾಧ್ಯಾನೆ ಇಲ್ಲಾ..' ನಿಖರವಾದ ದನಿಯಲ್ಲಿ ಹೇಳಿದ ಗುಂಡ
'ಸರಿ..ಯಾಕೆ ಕೆಲಸ ಬಿಡ್ತಿದ್ದೀಯ..ಅದನಾದ್ರೂ ಹೇಳು..'.
'ಅಯ್ಯೋ ಹೋಗ್ರೀ ..ಮೂರ್ ಹೊತ್ತೂ ಕೆಲ್ಸಾ..ಕೆಲ್ಸಾ..ಕೆಲ್ಸಾ..ಊಟ ತಿಂಡಿಗೆ ಟೈ ಮೇ ಇಲ್ಲಾ...'

1 comment: