Thursday, November 9, 2017

ನೂರು ದಿನಗಳು...


ಪುಟಾಣಿ ಸಫಾರಿ ಬಿಡುಗಡೆಯ ದಿನಾಂಕವನ್ನು ನಾವು ಮುಂದೂಡುತ್ತಲೇ ಬಂದಿದ್ದೆವು. ಅದಕ್ಕೆ ಕಾರಣವೂ ಇತ್ತೆನ್ನಿ. ಸುಖಾಸುಮ್ಮನೆ ದೊಡ್ಡ ದೊಡ್ಡ ಸಿನೆಮಾಗಳ ನಡುವೆ ಸ್ಪರ್ಧೆಗೆ ನಿಲ್ಲುವ ತಾಕತ್ತು ಇರಲಿಲ್ಲ. ದಿನಾಂಕ ನಿಕ್ಕಿಯಾಯಿತು. ನಾನು ನನ್ನ ಇನ್ನೊಬ್ಬರು ನಿರ್ಮಾಪಕರಿಗೆ ಹೇಳಿದ್ದೆ..”ಸರ್..ಸಿನಿಮಾ ಈ ವಾರ ಬಿಡುಗಡೆಯಾಗುತ್ತದೆ, ಹೆಚ್ಚೆಂದರೆ ಒಂದು ವಾರದ ಆಟವಷ್ಟೇ. ಆನಂತರ ಸಿಗುತ್ತೇನೆ, ಸೀದಾ ಶೂಟಿಂಗ್ ಗೆ ಹೋಗಿಬಿಡುವ..” ಎಂದು. ಅದಕ್ಕೆ ಕಾರಣವೂ ಇತ್ತು. ಪುಟಾಣಿ ಸಫಾರಿಗೂ ಮುನ್ನವೇ ಇನ್ನೊಂದು ಸಿನೆಮಾವನ್ನು ಗೆಳೆಯರೆಲ್ಲಾ ಸೇರಿ ನಿರ್ಮಿಸುವುದೆಂದು ಇತ್ಯರ್ಥವಾಗಿತ್ತು. ಅದರ ಚಿತ್ರೀಕರನಪೂರ್ವ ಕೆಲಸವೆಲ್ಲವೂ ಮುಗಿದಿತ್ತು. ಚಿತ್ರೀಕರಣ ಬಾಕಿಯಿತ್ತಾದರೂ ಪುಟಾಣಿ ಸಫಾರಿ ಚಿತ್ರದ ಕೆಲಸಗಳಲ್ಲಿ ನಾನು ಒಂದು ವರ್ಷದಷ್ಟು ದಿವಸ ನಾಟ್ ರೀಚಬಲ್ ಆಗಿದ್ದೆ. ಸಿನಿಮಾ ಬಿಡುಗಡೆಯಾಯಿತು. ಎರಡನೆಯ ವಾರಕ್ಕೆ ಕಾಲಿಟ್ಟಿತ್ತು. ನಾನು ಆ ನಿರ್ಮಾಪಕರಿಗೆ ಒಂದು ವಾರ ಮುಂದಕ್ಕೆ ಹಾಕಿದೆ. ಆನಂತರ ಮೂರನೆಯ ವಾರ, ನಾಲ್ಕನೆಯ ವಾರ ಪುಟಾಣಿ ಸಫಾರಿ ಪ್ರದರ್ಶನ ಕಾಣುತ್ತಲೇ ಹೋಯಿತು. ಲೆಕ್ಕ ಹಾಕಿದರೆ ಈವಾರಕ್ಕೆ ಹದಿನಾರು ವಾರಗಳಾಗಿವೆ ಸಿನಿಮಾ ಬಿಡುಗಡೆಯಾಗಿ. ಆದರೆ ಮಧ್ಯ ಎರಡುವಾರ ಮಾತ್ರ ನಮ್ಮ ಸಿನಿಮಾ ಯಾವ ಚಿತ್ರಮಂದಿರದಲ್ಲೂ ಪ್ರದರ್ಶನ ಕಾಣಲಿಲ್ಲ. ಪ್ರದರ್ಶನ ಕಂಡ ದಿನಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ ನಿನ್ನೆಗೆ ತೊಂಭತ್ತೊಂಭತ್ತು ದಿನಗಳಾಗುತ್ತವೆ. ಈವತ್ತಿಗೆ ನೂರನೆಯ ದಿನ. ಹಾರೋಹಳ್ಳಿ ವಿನಾಯಕದಲ್ಲಿ, ಶ್ರೀರಂಗಪಟ್ಟಣದ ಶ್ರೀದೇವಿ ಮತ್ತು ಅರಕೆರೆಯ ಶ್ರೀಮಂಜುನಾಥ ಚಿತ್ರಮಂದಿರಗಳಲ್ಲಿ ಶತದಿನ ಆಚರಿಸುವ ಸಂಭ್ರಮ ನಮ್ಮದಾಗಿದೆ.
ಮಕ್ಕಳ ಚಿತ್ರವೊಂದು ನೂರು ದಿನಗಳು ಪ್ರದರ್ಶನ ಕಂಡಿದ್ದು ಇತ್ತೀಚಿನ ದಿನಗಳಲ್ಲಿ ಅಪರೂಪ ಎನಿಸುತ್ತದೆ. ಈ ನಡುವೆ ಪುಟಾಣಿ ಸಫಾರಿ ಚಿತ್ರಮಂದಿರಗಳಲ್ಲಿ ನೂರನೆಯ ದಿನವೂ ನೋಡಲಿಕ್ಕೆ ಸಿಗುತ್ತಿದೆ ಎನ್ನುವುದು ಖುಷಿಯಾಗುತ್ತಿದೆ.
ಈ ನಡುವೆ ಕಲ್ಕತ್ತಾ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಹುಡುಕಿ ಹುಡುಕಿ, ತುಂಬಾ ಯೋಚಿಸಿ, ಚಿತ್ರೋತ್ಸವಗಳ ವಿವರ ತಿಳಿದುಕೊಂಡು ಚಿತ್ರೋತ್ಸವಗಳಿಗೆ ಕಳುಹಿಸುತ್ತೇನೆ ನಾನು. ಕಲಾತ್ಮಕ ಅಂಶಗಳಿಗಿಂತ ಮನರಂಜನೀಯ ಅಂಶಗಳೇ ಜಾಸ್ತಿಯಿರುವ ಪುಟಾಣಿ ಸಫಾರಿ ಚಿತ್ರವನ್ನು “ಪ್ರೌಢ” ತೀರ್ಪುಗಾರರು ಆಯ್ಕೆ ಮಾಡುತ್ತಾರೆಯೇ ಎನ್ನುವ ಅನುಮಾನ. ಆದರೆ ನಾನು ಹೆಕ್ಕಿ ಕಳುಹಿಸಿದ ಬಹುತೇಕ ಚಿತ್ರೋತ್ಸವಗಳಲ್ಲಿ ಚಿತ್ರ ಆಯ್ಕೆಯಾಗಿದೆ, ಪ್ರದರ್ಶನ ಕಂಡಿದೆ. ಅದೊಂದು ಸಂಭ್ರಮ. ಚಿತ್ರದ ಡಬ್ಬಿಂಗ್ ಹಕ್ಕುಗಳು ಮಾರಾಟವಾಗಿವೆ. ಉಪಗ್ರಹ ಪ್ರಸಾರದ ಹಕ್ಕುಗಳಿಗಾಗಿ ಮಾತುಕತೆ ನಡೆಯುತ್ತಿದೆ.
ಮಕ್ಕಳ ಚಿತ್ರ ಎಂದಾಕ್ಷಣ ಸಬ್ಸಿಡಿ ಹಣದೊಳಗೆ ಮುಗಿಸಿ ಎನ್ನುವ ನಿರ್ಮಾಪಕರುಗಳು ಸಿನೆಮಾವನ್ನೇ ಮುಗಿಸಿಬಿಡುತ್ತಾರೆ. ಆದರೆ ಗಳು ಜಿಪುಣತನ ಮಾಡದೆ ಧಾರಾಳ ತನ ತೋರಿಸಿದ್ದರಿಂದಲೇ ಪುಟಾಣಿ ಸಫಾರಿ ಕುಂದುಕೊರತೆಗಳ ನಡುವೆಯೂ ಪರಿಣಾಮಕಾರಿಯಾಗಿ ಬಂದದ್ದು. ಇನ್ನು ಚಿತ್ರಕ್ಕೆ ಕಡಿಮೆ ಉಪಕರಣಗಳಲ್ಲಿಯೇ ಗರಿಷ್ಠ ಕೆಲಸ ಮಾಡಿಕೊಟ್ಟ ಛಾಯಾಗ್ರಾಹಕ ಜೀವನ್ ಗೌಡ, ಒಂದೇ ಹಾಡಾದರೂ ಅದಕ್ಕೆ ತುಂಬಾ ಆಸಕ್ತಿವಹಿಸಿ ಸಂಗೀತ ಸಂಯೋಜನೆ ಮಾಡಿ, ಚಿತ್ರಕ್ಕೆ ಹಿನ್ನೆಲೆ ಸಂಗೀತ ಒದಗಿಸಿದ ವೀರ ಸಮರ್ಥ್, ಅದ್ಭುತವಾದ ಹಾಡು ಬರೆದುಕೊಟ್ಟ , ಅಚ್ಚುಕಟ್ಟಾಗಿ ಸಂಕಲನ ಮಾಡಿ ಸಿನೆಮಕ್ಕೊಂದು ಮೆರುಗು ತಂದುಕೊಟ್ಟದ್ದು ಸಂಕಲನಕಾರ .ಶಬ್ಧಗ್ರಹಣ ಮತ್ತು 5.1 ಮಾಡಿಕೊಟ್ಟದ್ದು. ಇನ್ನು ಚಿತ್ರಕ್ಕೆ ಮಿತ ಬಜೆತ್ತಿನಲ್ಲಿಯೇ ಪರಿಣಾಮಕಾರಿ  ಮಾಡಿಕೊಟ್ಟ ತಂಡ, ಗಳಿಗೆ ಮತ್ತು ಇನ್ನಿತರ ತಾಂತ್ರಿಕ ವರ್ಗಕ್ಕೆ ಚಿತ್ರಕ್ಕೆ ಸೆನ್ಸಾರ್ ಮಾಡಿಸಿಕೊಟ್ಟ ,
ಇನ್ನು ಅಂತರಾರ್ಷ್ಟ್ರೀಯ ಪ್ರದರ್ಶನಕ್ಕೆ ಬೇಕಾದದ್ದು ಇಂಗ್ಲೀಷ್ ಅಡಿಬರಹ. ಬರೀ ಒಂದೇ ಮಾತಿಗೆ, ಮೂರೇ ದಿನದಲ್ಲಿ ಅಚ್ಚುಕಟ್ಟಾಗಿ ಸರಳ ಇಂಗ್ಲೀಷ್ ನಲ್ಲಿ ಅಡಿಬರಹ ಬರೆದುಕೊಟ್ಟ ದಂಪತಿಗಳಿಗೆ ನಾನು ಯಾವತ್ತಿಗೂ ಋಣಿ. ಇನ್ನು ಅಚ್ಚು ಕಟ್ಟು ಅಭಿನಯ ನೀಡಿದ ಕಲಾವಿದರಾದ ಹಾಗೆಯೇ ಚಿತ್ರವನ್ನು ವಿತರಣೆ ಮಾಡಿದ  ಸಹಕಾರ ನೀಡಿದ ಎಲ್ಲರಿಗೂ ಅನಂತಾನಂತ ಧನ್ಯವಾದಗಳು...

ಎಲ್ಲಕ್ಕಿಂತ ಹೆಚ್ಚಾಗಿ ಪ್ರೇಕ್ಷಕರು, ಪುಟಾಣಿ ಪ್ರೇಕ್ಷಕರು..ಈವತ್ತಿನ ನೂರನೆಯ ದಿನದ ಸಂಭ್ರಮದ ರೂವಾರಿಗಳು ಇವರೆಲ್ಲಾ. ಎಲ್ಲರಿಗೂ ನನ್ನ ಅನಂತಾನಂತ ಧನ್ಯವಾದಗಳು.