Wednesday, December 25, 2013

ಚಿತ್ರೋತ್ಸವದ ಜಾಲತಾಣದ ಬೇಸರದ ಸಂಗತಿಯನ್ನು ಕುರಿತು...

ಹಬ್ಬದ ರೂಪದಲ್ಲಿ 75 ವರ್ಷಗಳಲ್ಲಿ ಕನ್ನಡ ಚಿತ್ರರಂಗದ ಬೆಳವಣಿಗೆ ಮತ್ತು ಅಭಿವೃದ್ಧಿ ಪ್ರದರ್ಶಿಸಲು ಆಯೋಜಿಸಲಾಗಿದೆ ಬಟ್ಟಿಗಳಲ್ಲಿ ಮತ್ತು ಛಾಯಾಚಿತ್ರಗಳನ್ನು ಅತ್ಯಂತ ಎಬ್ಬಿಸುವ ಪ್ರದರ್ಶನ ಸ್ನೇಹ ಹೆಚ್ಚು ವೀಕ್ಷಕ. ಸಿನಿಮಾ ಸೃಜನಶೀಲ ಮತ್ತು ಶೈಕ್ಷಣಿಕ ಅಂಶಗಳನ್ನು ಮೇಲೆ ............................
ಉತ್ಸವ ಸಮಿತಿ ಶ್ರೇಷ್ಠತೆ ಉನ್ನತ ಮಟ್ಟದ ಖಚಿತಪಡಿಸಿಕೊಳ್ಳಲು, ಗಿರೀಶ್ ಕಾಸರವಳ್ಳಿ, ವಿಶ್ವದ ಪ್ರಮುಖ ನಿರ್ಮಾಪಕರು ಒಂದು ವಹಿಸಿದ್ದರು. 
ಜೀವನದ ವಿವಿಧ ರಂಗಗಳ ಶ್ರೇಷ್ಠ ಸಲಹೆಗಾರರ ​​ಉನ್ನತ ಸಮಿತಿ ಹಬ್ಬದ ಹಿಂದೆ ಸ್ಪೂರ್ತಿಯಾಗಬಹುದು 
ಆಗಿತ್ತುಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರ ಸಂಸ್ಕೃತಿಯ ಪ್ರಮುಖ ಸೆಂಟರ್ ಆಗಲು ಕರ್ನಾಟಕ ಖ್ಯಾತಿವೆತ್ತ ಪರಂಪರೆ ಮತ್ತು ಸಾಹಿತ್ಯ, ಲಲಿತಕಲೆ ಮತ್ತು ಸಿನಿಮಾ ಜಾಗ ರಾಜ್ಯದ ಸಾಧನೆಗಳು ಅನುಗುಣವಾಗಿ. ...................
ಅಕಾಡೆಮಿ 4 BIFFES ಕಲಾತ್ಮಕ ನಿರ್ದೇಶಕ, ಭಾರತ, ಶ್ರೀ HN ನರಹರಿ ರಾವ್ ಫಿಲ್ಮ್ ಸೊಸೈಟಿ ಚಳುವಳಿಯ ಚಿತ್ರ ತಜ್ಞ ಮತ್ತು ಅನುಭವಿ ನೇಮಕ ಮಾಡಿದೆ... 

ಸಾರಿಯ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಒಳ್ಳೆಯ ಚಿತ್ರಗಳಿವೆ. ಅದು ಬೇರೆ ಮಾತು. ಅದರ ಬಗ್ಗೆ ಒಂದಷ್ಟು ಮಾಹಿತಿ ತಿಳಿದುಕೊಳ್ಳೋಣ ಎಂದು ಅದರ ಜಾಲತಾಣಕ್ಕೆ ಬೇಟಿ ಕೊಟ್ಟೆ. ಅಲ್ಲಿನ ಭಾಷೆಯ ಆಯ್ಕೆಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಇದ್ದುದರಿಂದ ನಾನು ಎರಡನೇ ಯೋಚನೆ ಮಾಡದೆ ಕನ್ನಡ ಆಯ್ಕೆ ಮಾಡಿಕೊಂಡು ಅಲ್ಲಿನ ವಿವರಗಳನ್ನು ಓದಲು ಪ್ರಾರಂಭಿಸಿದೆ. ಆಗ ಕಂಡ ಅವಸ್ಥೆ ಇದು. ಅದೆಂತಹ ಅಧ್ವಾನ ಎಂದರೆ ಈ ಸುಖಕ್ಕೆ ಯಾಕಾದರೂ ಕನ್ನಡದ ಭಾಷೆಯ ಆಯ್ಕೆ ಕೊಡುತ್ತಾರೋ ಎನಿಸದಿರಲಿಲ್ಲ. ಒಂದು ಚಿತ್ರೋತ್ಸವಕ್ಕೆ ಕಡಿಮೆ ಖರ್ಚು ಆಗುವುದಿಲ್ಲ. ಎಲ್ಲವನ್ನೂ ತಕ್ಕ ಮಟ್ಟಿಗೆ ಯೋಜಿಸಿ ಭಾಷೆಯ ವಿಷಯದಲ್ಲಿ ಅದರಲ್ಲೂ ನಮ್ಮದೇ ಭಾಷೆಯ ವಿಷಯದಲ್ಲಿ ಇಂತಹ ದಿವ್ಯ ನಿರ್ಲಕ್ಷ್ಯ ಕಂಡು ನನಗೆ ಅಚ್ಚರಿ, ಬೇಸರವಾಗದಿರಲಿಲ್ಲ.ಯಾಕೆ ಇಷ್ಟು ತಾತ್ಸಾರ. ಅಲ್ಲೇನೂ ಪುಟಗಟ್ಟಲೆಯ ಲೇಖನಗಳಿಲ್ಲ. ಇರುವ ಕೆಲವೇ ಕೆಲವು ಬರಹಗಳನ್ನೂ ಇಷ್ಟು ಅಧ್ವಾನವಾಗಿ ಬರೆಯುವುದಕ್ಕೆ ಅದೇಗೆ ಸಾಧ್ಯ ಮತ್ತು ಆ ಆಯೋಜಕರುಗಳು ಇದನ್ನು ಗಮನಿಸದಿರಲು ಹೇಗೆ ಸಾಧ್ಯ? ಹೀಗೆ ಮುಂದುವರೆದರೆ , ದೊಡ್ಡ ದೊಡ್ದವರೇ, ಹಿರಿಯರೇ. ಸಂಘ ಸಂಸ್ಥೆಗಳೇ ಹೀಗೆ ಮಾಡಿದರೆ ಅದೇಗೆ ನಮ್ಮ ಭಾಷೆ ಬೆಳೆಯಲು ಸಾಧ್ಯ ಎನಿಸದಿರಲಿಲ್ಲ. ಶ್ರೀ NR ವಿಷು ಕುಮಾರ್ ಶ್ರೀ HN ನರಹರಿ ರಾವ್ ಶ್ರೀ ಆರ್.ಕೆ. ಶಿವರಾಂ,ಶ್ರೀ ಚೆನ್ನಪ್ಪ ಪ್ರಕಾಶ್ ..ಹೀಗೆ ಸುಮಾರಷ್ಟು ದಿಗ್ಗಜರಿರುವಾಗ ಇಂತಹದ್ದು ಹೇಗೆ ಸಾಧ್ಯವಾಯಿತು ಎಂಬುದನ್ನು ಅವರೇ ಉತ್ತರಿಸಬೇಕೇನೋ?

ಈ ಕೆಳಗಿನ ಬರಹವನ್ನು ಓದಿ ಏನೆಂದು ಕಂಡು ಹಿಡಿದವರಿಗೆ ಚಿತ್ರೋತ್ಸವಕ್ಕೆ ಉಚಿತ ಪಾಸ್ ಕೊಡುವ ಬಹುಮಾನವಿದೆಯೇನೋ?
ಎಲ್ಲೋ, ಅಫ್ಘಾನಿಸ್ಥಾನ ಅಥವಾ ಬೇರೆಡೆ, ಯುದ್ಧ ಚೂರಾಗುತ್ತವೆ ದೇಶದಲ್ಲಿ ... ತನ್ನ ಮೂವತ್ತರ ಹರೆಯದ ಯುವತಿ ಕುಸಿದ ಕೋಣೆಯಲ್ಲಿ ತನ್ನ ಹಳೆಯ ಪತಿ ಮೇಲೆ ವೀಕ್ಷಿಸಿದಾಗ. ಅವರು ಏಕೆಂದರೆ ಕುತ್ತಿಗೆ ಗುಂಡಿನ ತರಕಾರಿ ರಾಜ್ಯದ ಕಡಿಮೆ ಇದೆ. ಅವರು ಆದರೆ ಸಹೋದರರು, ಜಿಹಾದ್ ತನ್ನ ಸಹಚರರು ತೊರೆಯಿತು ಕೇವಲ. ಒಂದು ದಿನ, ಮಹಿಳೆ ತನ್ನ ಮೂಕ ಪತಿ ತಮ್ಮ ಸಂಬಂಧದ ಬಗ್ಗೆ ತನ್ನ ಭಾವನೆಗಳನ್ನು ಬಗ್ಗೆ ಅವರಿಗೆ ಸತ್ಯವನ್ನು ಹೇಳಲು ನಿರ್ಧರಿಸುತ್ತಾಳೆ. ತನ್ನ ಬಾಲ್ಯದ, ತನ್ನ ನೋವನ್ನು ತನ್ನ ನಿರಾಶೆಯನ್ನು, ತನ್ನ ಒಂಟಿತನ, ತನ್ನ ಕನಸುಗಳ, ತನ್ನ ಆಸೆಗಳನ್ನು ಬಗ್ಗೆ ಮಾತಾಡುತ್ತಾನೆ ... ಅವರು ಕಳೆದ 10 ವರ್ಷಗಳ ಮದುವೆಯಾಗಿದ್ದಾರೆ ಸಹ, ಅವರು ಮೊದಲು ಮಾಡಿದ ಎಂದಿಗೂ ವಿಷಯಗಳನ್ನು ಹೇಳುತ್ತಾರೆ.

ಇದು ಅಫ್ಘಾನಿಸ್ತಾನ್ ದೇಶದ ಆಫ್ಘನಿಸ್ತಾನಿ ಭಾಷೆಯ ಚಲನಚಿತ್ರದ ಕನ್ನಡ ಲಿಪಿಯ ಸಾರಾಂಶವಂತೆ. ಬಹುಶ ಇದನ್ನು ಅಫ್ಘಾನಿಸ್ತಾನ್ ಭಾಷೆಯಲ್ಲಿ ಕೊಟ್ಟಿದ್ದರೂ ಅಲ್ಪಸ್ವಲ್ಪ ಅರ್ಥವಾಗುತ್ತಿತ್ತೇನೋ?