Tuesday, August 27, 2013

ಇದು ನನ್ನದೇ ಕಥೆ..


ನಾನು ಚಿತ್ರ ಬಿಡಿಸುತ್ತೇನೆ. ಅದು ನನಗೆ ಹುಟ್ಟಿದಾಗಿನಿಂದಲೇ ಬಂದದ್ದು. ಅದನ್ನು ನಾನು ಕಲಿತದ್ದಾದರೂ ಹೇಗೆ? ಅದೆಷ್ಟೇ ನೆನಪಿಸಿಕೊಂಡರೂ ನಂಗೆ ಗೊತ್ತಾಗುತ್ತಿಲ್ಲ. ಆದರೆ ಒಂದನ್ನು ಮಾತ್ರ ಸ್ಪಷ್ಟವಾಗಿ ಹೇಳಬಲ್ಲೆ. ನಂಗೆ ಬುದ್ದಿ ಬಂದಾಗಿಲಿಂದ ನಾನು ಬರೆಯುತ್ತೇನೆ. ಕೈಗೆ ಸಿಕ್ಕಿದ್ದರಲ್ಲಿ ಚಿತ್ರ ಬಿಡಿಸುತ್ತೇನೆ. ಮೊದಲೆಲ್ಲಾ ಇದ್ದಿಲನ್ನು ತೆಗೆದುಕೊಂಡು ಗೋಡೆಯ ಮೇಲೆ ಚಿತ್ರ ಬಿಡಿಸುತ್ತಿದ್ದೆ. ಹೂವುಗಳು, ಚಂದನೆಯ ಸೊಂಟದ ಮೇಲೆ ನೀರಿನ ಬಿಂದಿಗೆ ಹೊತ್ತುಕೊಂಡು ಹೊರಟ ಹೆಂಗಸರು, ಆಟವಾಡುತ್ತಿರುವ ಮಕ್ಕಳು,..ಹೀಗೆ. ಎಲ್ಲವನ್ನು ನನ್ನ ಕಲ್ಪನೆಯೊಂದಿಗೆ ಪುನರ್ರಚಿಸುತ್ತಿದ್ದೆ. ಆವಾಗೆಲ್ಲಾ ನನ್ನನ್ನು ನನ್ನ ಕಲೆಯನ್ನು ಮೆಚ್ಚಿಕೊಳ್ಳದಿದ್ದವರು ಯಾರು?
ಆದರೆ ಬೆಳೆಯುತ್ತಾ ಬೆಳೆಯುತ್ತಾ ಅದು ನನ್ನ ಹವ್ಯಾಸವಾಗಲಿಲ್ಲ.ಅದು ನಾನೇ ಆಯಿತು. ಅದನ್ನೇ ಗಂಭೀರವಾಗಿ ವೃತ್ತಿಯನ್ನಾಗಿ ಸ್ವೀಕರಿಸಲು ನಿರ್ಧರಿಸಿದೆ. ಆವಾಗಲಿಂದ ನನ್ನ ಪರಿಸ್ಥಿತಿ ಬಿಗಡಾಯಿಸಿತು ಎನ್ನಬಹುದು. ಎಲ್ಲಾ ತಲೆಕೆಳಗಾಯಿತು. ಕಲೆಗೆ ಪ್ರಪಂಚದಲ್ಲಿ ಬೆಲೆಯಿದೆ ಆದರೆ ಅದು ಹಣದ ರೂಪದಲ್ಲಿಲ್ಲ ಎಂಬ ಸತ್ಯ ಗೋಚರವಾಗುವಷ್ಟರಲ್ಲಿ ನನ್ನ ಜೀವನದ ಅರ್ಧ ಭಾಗವೇ ಕಳೆದುಹೋಗಿತ್ತು. ಸರಿ ಇನ್ನೇನು ಮಾಡುವುದು. ಮಾಡುವ ಮಾಡಿದ ಕೆಲಸವೆಲ್ಲಾ ಮಣ್ಣು ಎಂಬಂತಾಯಿತು. ಈ ಕಾರಣದಿಂದಲೇ ಎಷ್ಟೋ ಮಹಾನ ಕಲಾವಿದರುಗಳು ಆತ್ಮಹತ್ಯೆ ಮಾಡಿಕೊಂಡದ್ದು ಎನಿಸಿತು. 
ಹೌದು. ಈ ಜಗತ್ತಿನಲ್ಲಿ ನಾನು ಬದುಕಿ ಮಾಡುವಂತಹದ್ದಾದರೂ ಏನು? ಯಾಕಾಗಿ ಬದುಕಬೇಕು.? ನಾನು ಬದುಕಿದರೆ ಸಂತಸ ಪಡುವವರಾದರೂ ಯಾರು? ಸತ್ತರೆ ಯಾರಾದರೂ ಅಳುತ್ತಾರಾ..?
ಎಲ್ಲಾ ಪ್ರಶ್ನೆಗಳಿಗೆ 'ಇಲ್ಲಾ' ಎನ್ನುವ ಒಂದೆ ಉತ್ತರವಾದರೆ, ನಾನಾದರೂ ಯಾಕೆ ಬದುಕಬೇಕು ಎನಿಸಿತು.
ಇಂತಹವು ಅದೆಷ್ಟೋ ಆಲೋಚನೆಗಳು ನನ್ನ ತಲೆಗೆ ಬಂದಾಗ ಅದನ್ನು ಕಾರ್ಯ ರೂಪಕ್ಕೆ ತರಲು ನಾನು ತಡಮಾಡಿದ್ದೆ. ಯಾಕೋ ಇದನ್ನು ತಡ ಮಾಡಬಾರದು ಎನಿಸಿತು.
ನಾನು ಸಾಯಲು ನಿರ್ಧರಿಸಿದೆ. ಆತ್ಮಹತೆಯಂತಹ ಮಹಾಪಾಪಕ್ಕೆ ಕೈ ಹಾಕಲು ಯೋಚಿಸಿದೆ.
ಆದರೆ ಇಲ್ಲಿ ಸತ್ತರೆ ಒಂದಷ್ಟು ಜನಕ್ಕಾದರೂ ನಾನು ಗೊತ್ತು.ಅವರು ಮರುಗುವುದಕ್ಕಿಂತ ಬದುಕಲಾರದೆ ಸತ್ತ..? ಎಂದು ಮೂಗು ಮುರಿಯುವುದು ಶತಸಿದ್ದ. ಹೌದು. ಇಲ್ಲಿಯವರೆಗೆ ಒಂದು ಸ್ವಲ್ಪವೂ ಸಹಾಯಕ್ಕೆ ಬಾರದ ಜನರ ಕೈಯಲ್ಲಿ ಏನೇನೋ ಯಾಕೆ ಮಾತನಾದಿಸಿಕೊಳ್ಳಬೇಕು.
ದೂರದ ಊರಿಗೆ ಹೋಗಿ ಸತ್ತರೆ ಯಾರಿಗೂ ನಾನು ಯಾರು ಎಂಬುದು ಗೊತ್ತಾಗಿವುದಿಲ್ಲ.
ಅದಕ್ಕೆ ನಾನು ದೂರದ ಊರಿನ ಹಾದಿ ಹಿಡಿದೇ.
ಸಾಯಲು ನಿರ್ಧರ್ಸಿದ ಮೇಲೆ ಅದಕ್ಯಾಕೆ ಅವಸರ. ನಿಧಾನಕ್ಕೆ ಸಾವಧಾನಕ್ಕೆ ಸತ್ತರಾಯಿತು ಎಂದುಕೊಂಡೆ. ಹಾಗಂತ ಸಾಯುವ ನಿರ್ಧಾರವನ್ನೇನೂ ಬಿಡಲಿಲ್ಲ. 
ಆದರೆ ಆಕೆ ನನ್ನ ಅಷ್ಟೂ ಯೋಚನೆ ಯೋಜನೆಯನ್ನು ತಲೆಕೆಳಗು ಮಾಡಿಬಿಟ್ಟಿದ್ದಳು. ಅವಳು ವಿಧವೆ. ಒಂಟಿಯಾಗಿದ್ದಳು. ಅಕಸ್ಮಾತ್ತಾಗಿ ಗೊತ್ತು ಗುರಿತಿಲ್ಲದ ಊರಿನಲ್ಲಿ ಕಣ್ಣಿಗೆ ಬಿದ್ದಿದ್ದಳು. 
ಹೌದು. ನಾನಾಕೆಯ ಪ್ರೀತಿಯಲ್ಲಿ ಬಿದ್ದಿದ್ದೆ. ಸಾವಿನ ತುದಿಯಲ್ಲಿದ್ದವನಿಗೆ ಪಟಾರನೆ ಹಿಂದಕ್ಕೆ ಜಿಗಿಯುವ ಹಂಬಲವಾಯಿತು.ಜಿಗಿದುಬಿಡಲಾ ..? ಬೇಡವಾ..? ಪ್ರಶ್ನೆಗೆ ಉತ್ತರ ಹುಡುಕುವುದೇ ಕಷ್ಟವಾಯಿತು.
2002 ರಲ್ಲಿ ಬಿಡುಗಡೆಯಾದ ಸ್ಪ್ಯಾನಿಷ್ ಭಾಷೆಯಲ್ಲಿ ಜಪೋನ್ ಎನ್ನುವ ಚಿತ್ರವೊಂದಿದೆ.ಕಾರ್ಲೋಸ್ ರೆಯ್ಗದಾಸ್ ಅದರ ನಿರ್ದೇಶಕ. ಆತನ ಹಿಂದಿನ ಚಿತ್ರಗಳಾದ ಬ್ಯಾಟಲ್ ಇನ್ ದಿ ಹೆವನ್, ಸೈಲೆಂಟ್ ಲೈಟ್ ಚಿತ್ರಗಳನ್ನು ನೀವು ನೋಡಿದ್ದರೆ ಆತನ ಬಗ್ಗೆ ಸ್ವಲ್ಪವಾದರೂ ಗೊತ್ತಿರುತ್ತದೆ. ಸ್ವಲ್ಪ ಮಂದಗತಿಯ ನಿರೂಪನೆಯಾದರೂ ಚಿತ್ರದ ಕಥೆಯಲ್ಲಿ ಚಿತ್ರಕಥೆಯಲ್ಲಿ ಅದೆಂತಹದ್ದೋ ಸೆಳೆತವಂತೂ ಇದ್ದೆ ಇರುತ್ತದೆ. ಆತನ ಚಿತ್ರಗಳ ಪಾತ್ರಧಾರಿಗಳೂ ಅಷ್ಟೇ. ತನ್ಮಯರಾಗಿ ನಟಿಸುತ್ತಾರೆ. ಜಪೋನ್ ಚಿತ್ರದಲ್ಲೂ ಅಷ್ಟೇ .. ನಿರೂಪಣೆ ಮತ್ತು ಕಥೆ ನಿಧಾನಕ್ಕೆ ಸಾಗುತ್ತದೆ. ಕಥೆಯ ಹಿಂದು ಮುಂದೆ ನಮಗೆ ಗೊತ್ತಾಗಿಬಿಡುತ್ತದೆ. ಮುಂದೇನೂ ಕುತೂಹಲಗಳು ಉಳಿಯುವುದಿಲ್ಲ. ಆದರೂ ನೀವು ಚಿತ್ರವನ್ನು ಪೂರ್ತಿಯಾಗಿ ನೋಡದೆ ಇರಲಾರಿರಿ.

No comments:

Post a Comment