Wednesday, June 13, 2012

ಅನಿರೀಕ್ಷಿತ ಪ್ರವಾಸವೂ...


ಇರುವುದಿಲ್ಲ. ಯಾಕೆಂದರೆ ದಿನದ ಇಪ್ಪತ್ತನಾಲ್ಕು ತಾಸೂ ಚಿತ್ರದ ಕಥೆಯ ಚರ್ಚೆಯಲ್ಲೇ ಕಳೆದು ಹೋಗಿರುತ್ತದೆ. ಸುಮ್ಮನೇ ಹಸಿರು ಪ್ರದೇಶದ, ಹೊಸ ಹೊಸ ಜಾಗದ ನಡುವೆ ನಡೆಯುತ್ತ 'ಹಾಗೇ ಮಾಡೋಣ', 'ಹೀಗೆ ಮಾಡಿದರೆ ಚೆನ್ನಾಗಿರುತ್ತೆ..' ಎಂದು ಮಾತಾಡುಸಿನಿಮಾದ ಕೆಲಸಕ್ಕಾಗಿ ಒಂದು ವಾರ ಭಟ್ಕಳದ ಅಕ್ಕಪಕ್ಕದ ಪ್ರದೇಶಗಳಿಗೆ ಭೇಟಿನೀಡಬೇಕಾಗಿತ್ತು. ಸಿನಿಮಾದ ಬರವಣಿಗೆಯ ಕೆಲಸವೆಂದರೆ ಅಲ್ಲಿ ಸಿನಿಮಾ ನೋಡಲು ಆಸ್ಪದ ತ್ತಾ ಸಾಗುವುದೇ ಒಂದು ವಿಶಿಷ್ಟ ಅನುಭವ. ಅವೇನೂ ಪ್ರವಾಸಿ ತಾಣಗಳಲ್ಲ. ಅಲ್ಲಿನ ಜನರು ಬದುಕುವ ಪರಿ, ಅವರ ಊಟತಿಂಡಿ ವ್ಯವಸ್ತೆ, ಅಲ್ಲಿನ ರಾಜಕೀಯ ಪರಿಸ್ಥಿತಿ, ಅಲ್ಲಿನ ಜನರ ಮನಸ್ಥಿತಿ, ಸಾಹಿತ್ಯ, ಸಿನಿಮಾ, ರಾಜಕೀಯ, ವಿದ್ಯಾಭ್ಯಾಸಗಳೆಡೆಗೆ ಅವರಿಗಿರುವ ದೃಷ್ಟಿಕೋನ ಮುಂತಾದವುಗಳನ್ನು ಗಮನಿಸುವುದೇ ನಮ್ಮ ಮುಖ್ಯ ಉದ್ದೇಶವಾಗಿತ್ತದು. ಅದರಲ್ಲೂ ಭಟ್ಕಳ ಅಕ್ಕಪಕ್ಕದ ಸುಮಾರು ಹಳ್ಳಿಗಳಿಗೆ ಬಸ್ಸಿಡಿದು ಆಟೋದಲ್ಲಿ ಓಡಾಡಿಕೊಂಡು ಅಲ್ಲಿನ ಜನರ ಜೊತೆ ಅದೂ ಇದೂ ಮಾತಾಡುವುದೇ ಒ೦ದು ಮಜ. ನಾವಿದ್ದ ಜಾಗದಿಂದ ಮುರಡೇಶ್ವರ ಕೇವಲ ಹನ್ನೆರೆಡು ಕಿಲೋಮೀಟರ್ ಆದ್ದರಿಂದ ಅಲ್ಲೂ ಹೋಗಿಬಂದುಬಿಡೋಣವೆಂದುಕೊಂಡು ಹೊರಟೇಬಿಟ್ಟವು. ವರ್ಷಾನೂ ಗಟ್ಟಲೇ ಶಿವನನ್ನು ಕುರಿತು ತಪಸ್ಸು ಮಾಡುತ್ತಾನೆ ರಾವಣ. ಈಶ್ವರ ಅವನ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾಗಿ ಏನು ಬೇಕೆಂದು ಕೇಳಿದಾಗ ತನಗೆ ಆತ್ಮಲಿಂಗ ಕರುಣಿಸು ಎಂದು ಬೇಡಿಕೊಳ್ಳುತ್ತಾನೆ. ಈಶ್ವರ ತಥಾಸ್ತು ಎಂದು ಆತ್ಮಲಿಂಗ ಕರುಣಿಸುತ್ತಾನೆ. ಆದರೆ ನಾರದ ಮತ್ತು ಗಣಪತಿ ಸೇರಿಕೊಂಡು ಅದು ಲಂಕೆಯ ಪಾಲಾಗುವುದನ್ನು ತಪ್ಪಿಸಬೇಕೆಂದು ಉಪಾಯಮಾಡುತ್ತಾರೆ. ರಾವಣನು ಸಂಧ್ಯಾವಂದನೆ ಮಾಡಬೇಕಾದಾಗ ಗಣಪತಿ ಮಾರುವೇಶ ಧರಿಸಿ ಶಿವನಿಂದ ಆತ್ಮಲಿಂಗವನ್ನು ಪಡೆದುಕೊಂಡು ತಾನು ಮೂರು ಎಣಿಸುವವರೆಗೆ ಬರದಿದ್ದರೆ ಅದನ್ನು ಭೂಸ್ಪರ್ಶಮಾಡಿಬಿಡುತ್ತೇನೆ ಎಂದು ಹೇಳುತ್ತಾನೆ. 'ಸರಿ' ಎಂದು ರಾವಣ ಸಂಧ್ಯಾವಂದನೆಯಲ್ಲಿ ನಿರತನಾದಾಗ ಗಣಪತಿ ಮೂರು ಬಾರಿ ಕೂಗಿ ಕರೆದು ಲಿಂಗವನ್ನು ಭೂಸ್ಪರ್ಶಮಾಡಿಯೇ  ಬಿಡುತ್ತಾನೆ. ಒಮ್ಮೆ ಭೂಸ್ಪರ್ಶವಾದ ಲಿಂಗವನ್ನು ಮತ್ತೆ ತನ್ನ ವಶಕ್ಕೆ ತಗೆದುಕೊಳ್ಳಲು ಪ್ರಯತ್ನಿಸಿ ಸಾಧ್ಯವಾಗದಿದ್ದಾಗ ತನ್ನ ಗದೆಯಿಂದ ಭಾರಿಸುತ್ತಾನಂತೆ ರಾವಣ. ಅವನ ಹೊಡೆತಕ್ಕೆ ಐದು ಚೂರಾಗುವ ಶಿವಲಿಂಗ ಐದು ಕಡೆಗಳಲ್ಲಿ ಬೀಳುತ್ತದೆ. ಅವೇ ಗೋಕರ್ಣ, ಮುರುಡೇಶ್ವರ, ಸಜ್ಜೇಶ್ವರ, ಧಾರೇಶ್ವರ, ಗುಣವಂತೇಶ್ವರ. ಅಲ್ಲಿನ ಪುರಾಣದ ಕಥೆ ಕೇಳಿದ ಮೇಲೆ ಕೊನೆಯ ದಿನ ಆ ಐದು ಪಂಚಕ್ಷೇತ್ರಗಳನ್ನೂ ಸುತ್ತಿಬರಬೇಕೆಂದುಕೊಂಡು ನಾನು ಗೆಳೆಯ ಗಿರಿಬಾಲು ನಿರ್ಧರಿಸಿದೆವು. ನನಗೆ ಪ್ರತಿಸಾರಿಯೂ ಪುರಾಣದ ಕಥೆ ಕೇಳುವಾಗ ಸಿನಿಮಾಕ್ಕೇ ಅದೆಂತಹ ಅದ್ಭುತ ಕುತೂಹಲಕಾರಿ ವಸ್ತು ಎನಿಸುತ್ತದೆ. ನಮ್ಮ ಪುರಾಣದಲ್ಲಿರುವ ರೋಚಕತೆ ಅಬ್ಬಬ್ಬಾ...
ಇವೆಲ್ಲಾ ವೈಯಕ್ತಿಕ ಪ್ರಲಾಪದ ನಡುವೆಯೂ ಸಿಡ್ನೀ ಶೆಲ್ಡನ್ ಮಾತ್ರ ನನ್ನನ್ನು ಬಿಡುತ್ತಿಲ್ಲ. ಅವನ ದಿ ನೇಕಡ್ ಫೇಸ್ ಓದಿದೆ. ತುಂಬಾ ರೋಮಾಂಚಕಾರಿ ಕಾದಂಬರಿ ಅದು. ಒಬ್ಬ ಮನಶಾಸ್ತ್ರದ ವೈದ್ಯನ ಸುತ್ತಮುತ್ತ ನಡೆಯುವ ಕಥೆ ಅದ್ಯಾವ ಪರಿ ಓದಿಸಿಕೊಂಡಿತೆಂದರೆ ಕೆಲಸದ ನಡುನಡುವೆ ಸ್ವಲ್ಪ ಸಮಯ ಸಿಕ್ಕರೂ ಪುಟಬಿಡಿಸುವಂತೆ ಮಾಡುತ್ತಿತ್ತು. ಓದುಗ ಏನನ್ನೂ ಕಲ್ಪಿಸಿಕೊಳ್ಳಲು ಸಾಧ್ಯವಾಗದಂತಹ ವೇಗದಲ್ಲಿ ಕಾದಂಬರಿ ಓಡುತ್ತದೆ. ಪ್ರತಿ ನಿರೀಕ್ಷೆಯನ್ನೂ ಸುಳ್ಳು ಮಾಡುವ ಶೆಲ್ಡನ್, ಅನಿರೀಕ್ಷಿತ ತಿರುವುಗಳನ್ನು ಕೊಟ್ಟು ಓದುಗರನ್ನು ಅಚ್ಚರಿಗೀಡುಮಾಡುತ್ತಾನೆ. ಕೊನೆಯ ಹತ್ತು ಹದಿನೈದು ಪುಟಗಳು ಸ್ವಲ್ಪ ಉದ್ದವಾಯಿತೇನೋ ಅನಿಸಿದ್ದು ನನ್ನ ವೈಯಕ್ತಿಕ ಅಭಿಪ್ರಾಯ. ಹಾಗೆ ರವಿಬೆಳೆಗೆರೆಯವರ ಹಿಮಾಗ್ನಿಯನ್ನೂ ಓದಿ ಮುಗಿಸಿದೆ. ಸುಮಾರು ನಾಲ್ಕು ನೂರು ಪುಟಗಳು ಎರಿಕ್ ಬಾನಾ ಅಭಿನಯದ ಮ್ಯೂನಿಕ್ ಚಿತ್ರದ ಕನ್ನಡ ರೂಪಾಂತರ ಎನಿಸಿದರೂ ಕೊನೆಯ ನೂರು ಪುಟಗಳು ಬೇರೆಯದೇ ಆದ ತಿರುವನ್ನು ತೆಗೆದುಕೊಳ್ಳುತ್ತದೆ.  ಏನೆಲ್ಲಾ ಸಾಹಸಮಾಡಿ, ಪ್ರಾಣದ ಹಂಗು ತೊರೆದು ಭಯೋತ್ಪಾದಕರ ಮೂಲ ವ್ಯಕ್ತಿಗಳನ್ನು ಬಗ್ಗು ಬಡಿಯುವ ನಾಯಕ ಕೊನೆಯಲ್ಲಿ ತನ್ನ ಸಂಬಳಕ್ಕಾಗಿ ತನ್ನವರ ವಿರುದ್ಧವೇ ಹೋರಾಡುವ ಅಂಶ ರೋಚಕ ಎನಿಸಿತು.ಈಗ ಸಿಡ್ನೀ ಶೆಲ್ಡನ್ ರಚಿತ ಕಾದಂಬರಿ ದಿ ಅದರ್ ಸೈಡ್ ಆಫ್ ಮಿಡ್‌ನೈಟ್ ಪುಸ್ತಕ ತಂದಿಟ್ಟುಕೊಂಡಿದ್ದೇನೆ.ಈಗಾಗಲೇ ಇದೇ ಕಾದಂಬರಿ ಆಧಾರಿತ ಸಿನಿಮಾವನ್ನು ನೋಡಿರುವುದರಿಂದ ಅದರ ಪಾತ್ರಗಳು ಅಚ್ಚಳಿಯದೇ ಮನಸ್ಸಿನಲ್ಲಿ ಹಾಗೇ ಉಳಿದಿವೆ. ಮತ್ತೇ ಅದನ್ನೇ ಬರಹದ ರೂಪದಲ್ಲಿ ಮನತುಂಬಿಕೊಳ್ಳುವ ಪುಳಕಕ್ಕೆ ಸಮಯಬೇಡುತ್ತಿದ್ದೇನೆ.
ನಿಮ್ಮ  ಸಮಾಚಾರವೇನು..?



3 comments:

  1. modaleneyadaagi welcome back. we missed u on world cinema..its nice to know u share my love for travel and books..i have read all of sydney sheldon.
    Munich was a good movie...
    waiting to watch bhaagerati kannada movie which is on in a theatre near my house...
    idu namma samaachara!
    :-)
    malathi S

    ReplyDelete
  2. ನಾನೂ ಕೂಡ ತು೦ಬಾ ಮಿಸ್ ಮಾಡಿಕೊ೦ಡೆ..
    ಅಯ್ಯಪ್ಪ...ನೀವು ಎಲ್ಲಾ ಕಾದ೦ಬರಿ ಒದಿರೊದ್ರಿ೦ದ ನನಗೆ ಭಾರಿ ಖುಷಿ...ಹಾಗಾದ್ರೆ ನೆಕ್ಸ್ಟ್ ಯಾವ ಕಾದ೦ಬರಿ ಕೈಗೆತ್ತಿಕೊ೦ಡ್ರೆ ಮಜಾ ಇರುತ್ತೆ ಹೇಳಿ...

    ReplyDelete
  3. hey monne 'The tin drum'(Gunter Grass) pustaka odtaa adara jate you-tube nalli film tuNukugaLanna haakkondu nODde..esTu majavaagittu gottaa? have u tried that??
    Rage of Angels odi next...like that very much..
    :-)
    ms

    ReplyDelete