ಸ್ಟಾರ್ ಗಳನ್ನಿಟ್ಟುಕೊಂಡು ಸಿನಿಮಾ ಮಾಡುವುದು ಕಷ್ಟ ಎಂಬುವುದು ನಮ್ಮ ಚಿತ್ರರಂಗದಲ್ಲಿ ಸಾಮಾನ್ಯವಾದ ಮಾತು. ಅದರಲ್ಲಿ ಸತ್ಯವೂ ಇದೆ, ಸುಳ್ಳೂ ಇದೆ. ಏಕೆಂದರೆ ಒಬ್ಬ ಸ್ಟಾರ್ ತನ್ನ ಅಭಿಮಾನಿಗಳು, ಅವರ ನಿರೀಕ್ಷೆ ಮುಂತಾದವುಗಳನ್ನು ಅಂದಾಜು ಮಾಡಿಕೊಂಡೆ ಕತೆ ಕೇಳುತ್ತಾನೆ. ಮತ್ತು ಕತೆ ಆ ಇಮೇಜ್ ಗೆ ತಕ್ಕಂತಿರಲಿ ಎನ್ನುತ್ತಾನೆ. ಇದು ತಪ್ಪಲ್ಲ. ಏಕೆಂದರೆ ದರ್ಶನ್ ನಂತಹ ಮಾಸ್ , ಚಾಲೆಂಜಿಂಗ್ ಸ್ಟಾರ್ ಮನೆಯೇ ಮಂತ್ರಾಲಯದಂತಹ ಸಿನಿಮಾದಲ್ಲಿ ಮಾಡಿದರೆ ನನಗೆ ನೋಡಲು ಇಷ್ಟವಾಗುವುದಿಲ್ಲ. ಹಾಗೆಯೇ ಶರಣ್ ಸಿಂಘಂ ಚಿತ್ರದಲ್ಲಿ ಅಭಿನಯಿಸಿದರೆ ನೋಡುವುದಕ್ಕೆ ತಮಾಷೆಯಾಗಿರುತ್ತದೆ. ಹಾಗಂತ ಇಮೇಜ್ ಗೆ ಕಟ್ಟು ಬಿದ್ದರೆ ಸ್ಟಾರ್ ಒಳಗಿನ ಕಲಾವಿದನನ್ನು ಕೊಂದುಹಾಕಿದಂತಲ್ಲವೇ..? ಅದೂ ನಿಜವೇ. ಆದರೆ ಸ್ಟಾರ್ ಇಮೇಜ್ ಮತ್ತು ಅದಕ್ಕೆ ತಕ್ಕುದಾದ ಕತೆ-ಚಿತ್ರಕತೆಯಲ್ಲಿ ಯಶಸ್ಸಿದೆ. ಅಥವಾ ಪ್ರಯೋಗಕ್ಕೂ ಗೆಲುವಿದೆ. ಆದರೆ ಅವರನ್ನು ಸಂಬಾಲಿಸುವುದು ಕಷ್ಟದ ಕೆಲಸವೇ. ನಮ್ಮ ಚಿತ್ರ ಪುಟಾಣಿ ಸಫಾರಿಯಲ್ಲಿ ಯಾವುದೇ ಸ್ಟಾರ್ ಇಲ್ಲ. ಆದರೆ ಮಕ್ಕಳನ್ನು ತಾರಾಬಳಗದಲ್ಲಿಟ್ಟುಕೊಂಡು ಸಿನಿಮಾ ಮಾಡುವುದು ಸುಲಭದ ಕೆಲಸವಲ್ಲ. ತೀರಾ ಗದರಿದರೆ ಮುಖ ಕೆಡಿಸಿಕೊಳ್ಳುತ್ತವೆ. ಇಲ್ಲ ಅಳುತ್ತವೆ. ಆವಾಗ ಯಾವ ಬ್ರಹ್ಮ ಬಂದರೂ ಅವರಿಂದ ಅಭಿನಯ ಹೊರಗೆ ತೆಗೆಯುವುದು ಕಷ್ಟ. ಹಾಗೆಯೇ ಅವರನ್ನು ತೀರಾ ಬಳಲುವ ಹಾಗೆ ಕೆಲಸ ತೆಗಿಸಲು ಸಾಧ್ಯವಿಲ್ಲ. ಸ್ವಲ್ಪ ವಾತಾವರಣ ಏರುಪೇರಾದರೂ ಶೀತ ಜ್ವರದಂತಹವು ಅಮರಿಕೊಳ್ಳುತ್ತವೆ. ಇವೆಲ್ಲವನ್ನೂ ನಿವಾರಿಸಿಕೊಂಡು ಸಿನಿಮಾ ತೆಗೆಯುವುದು ಸ್ಟಾರ್ ಗಳನ್ನ ನಿಭಾಯಿಸುವುದಕ್ಕಿಂತ ಕಷ್ಟದ್ದಾಗುತ್ತವೆ.
ಅದರ ಜೊತೆಗೆ ಇರಲಿ ಎಂಬಂತೆ ಮತ್ತೊಂದು ಕಷ್ಟವನ್ನು ತಲೆಯ ಮೇಲೆ ಎಳೆದುಕೊಂಡಿದ್ದೇನೆ. ನಾನು ಅಯ್ತುಕೊಂಡಿರುವುದು ಕಾಡಿನಲ್ಲಿ ನಡೆಯುವ ಕತೆ. ಸಫಾರಿ ಎಂದ ಮೇಲೆ ಪ್ರಾಣಿಗಳಿರಲೇ ಬೇಕಲ್ಲವೇ? ಈ ಪ್ರಾಣಿಗಳಿಗೆ ಯಾವ ಸ್ಟಾರ್ ಕೂಡ ಸರಿಗಟ್ಟಲಾರರು. ಮೊನ್ನೆ ಒಂದಷ್ಟು ಶೂಟ್ ಮಾಡಿಕೊಂಡು ಬಂದುಬಿಡೋಣ ಎಂದು ನಮ್ಮ ತಂಡ ಹೊರಟೆವು ನೋಡಿ. ಅದರ ಕಷ್ಟಗಳನ್ನು ಹೇಳುವುದಾದರೂ ಹೇಗೆ. ಈ ಅರಣ್ಯಜೀವಿ ಚಿತ್ರೀಕರಣ ಬಜೆಟ್, ಸಮಯ ಮತ್ತು ಸಾವಧಾನವನ್ನು ಬೇಡುತ್ತವೆ. ಯಾವುದಾದರೂ ಒಂದು ಮಿಸ್ ಆದರೂ ಅಲ್ಲಿಗೆ ಆವತ್ತಿನ ಚಿತ್ರೀಕರಣ ಮುಗಿದಂತೆ. ಒಂದೇ ಉದಾಹರಣೆ ಹೇಳುತ್ತೇನೆ ಕೇಳಿ. ಅದೊಂದು ಜಾಗದಲ್ಲಿ ಹಿಂಡುಹಿಂಡಾಗಿ ಆನೆಗಳು ಬರುತ್ತವೆ ಎಂಬುದನ್ನು ಗೆಳೆಯ ಚಂದ್ರಶೇಖರ್ ಹೇಳಿದಾಗ ನಾವು ಅಲ್ಲಿಗೆ ಹೊರಟುನಿಂತಿದ್ದೆವು. ಅವುಗಳು ಬರುವುದು ಸಂಜೆ ನಾಲ್ಕರ ಹೊತ್ತಿಗೆ. ಹಾಗಂತ ಬರಲೇಬೇಕು ಎಂಬುದಿಲ್ಲ. ಬಂದರೆ ಬರಬಹುದು, ಇಲ್ಲವೆಂದರೆ ಇಲ್ಲ. ಇಷ್ಟಕ್ಕೂ ಚಿತ್ರೀಕರಣ ಎಂದಾಗ ಮೇಕಪ್ ಮತ್ತಿಕೊಂಡು ಓಡಿಬಂದು ಪೋಸು ಕೊಡಲಿಕ್ಕೆ ಅವೇನು ನಾವೇ..? ಅವುಗಳಿಗೆ ಹಣ, ಸ್ಟಾರ್ ಗಿರಿ, ಬಿಲ್ಡ್ ಅಪ್ ಮುಂತಾದ ಆಮಿಷ ತೋರಿಸಿ ಕರೆಸಲಾದೀತೇ.. ಮದ್ಯಾಹ್ನ ಎರಡು ಘಂಟೆಗೆ ನಿಗದಿತ ಜಾಗಕ್ಕೆ ಹೋಗಿ ಕುಳಿತುಕೊಂಡೆವು, ಅಷ್ಟೇ.. ನಾಲ್ಕೂವರೆ ಅಷ್ಟೊತ್ತಿಗೆ ಬಂದದ್ದು ಆನೆಗಳ ಹಿಂಡು, ಸುಮಾರು ಏಳು ಅನೆಗಳಿದ್ದವು.. ಅದಕ್ಕೂ ಮುನ್ನ ನವಿಲು, ಜಿಂಕೆ, ನರಿಗಳು, ಕಾಡುನಾಯಿಗಳು ನಮ್ಮನ್ನು ಭೇಟಿ ಮಾಡಿಹೋಗಿದ್ದವು. ಬಂದದ್ದು ನಿಂತದ್ದು ಕೇವಲ ಹದಿನೈದು ನಿಮಿಷಗಳು.. ಅಷ್ಟೇ. ಆಮೇಲೆ ಕಾಡೊಳಗೆ ಓಡಿಹೋದವು. ಆನಂತರ ಕತ್ತಲಾಗುವವರಗೂ ಕಾಯ್ದು ಬಂದದ್ದಾಯಿತು. ಇದು ಒಂದು ದಿನದ ಕತೆ. ಆದರೆ ನಮ್ಮ ಸಫಾರಿ ಚಿತ್ರೀಕರಣ ಅಷ್ಟೂ ದಿನಗಳಲ್ಲಿ ಚಿತ್ರೀಕರಿಸಿದ್ದಕ್ಕಿಂತ ಕಾಯ್ದದ್ದೆ ಹೆಚ್ಚು. ಅದರಲ್ಲೂ ಸಾಕು ಆನೆಯಾದರೆ ಭಯವಿಲ್ಲ. ಆದರೆ ಕಾಡಾನೆಗಳನ್ನೂ ನಂಬುವುದಾದರೂ ಹೇಗೆ. ನಾವು ಅವಿತುಕುಳಿತ ಪೊದೆಯೊಳಗೆ ಪಕ್ಕದಲ್ಲಿಯೇ ಹಾವಿದ್ದರೆ..? ಎಂಬಿತ್ಯಾದಿ ಭಯಗಳು ನಮ್ಮನ್ನು ಮತ್ತಷ್ಟೂ ನಡುಗುವಂತೆ ಮಾಡುತ್ತಿದ್ದದ್ದು ಸತ್ಯ. ನಮ್ಮ ಸಿನಿಮಾದಲ್ಲಿ ಒಟ್ಟಾರೆ ನಿಮಿಷಗಟ್ಟಲೆ ಬರುವ ಚಿತ್ರಣಕ್ಕೆ ದಿನಗಟ್ಟಲೆ ಕ್ಯಾಮೆರಾ ಹಿಡಿದಿದ್ದೇವೆ. ವಾರಗಟ್ಟಲೆ ಕಾದಿದ್ದೇವೆ. ನೂರಾರು ಕಿಲೋಮೀಟರು ಹಾದಿ ಸವೆಸಿದ್ದೇವೆ.
ನೀವು ಇದೆ ರಸ್ತೆಯಲ್ಲಿ ಓಡಾಡಿದರೆ ಕಾಡು ಪ್ರಾಣಿಗಳು ರಸ್ತೆಗೆ ಬರುತ್ತವೆ ಎಂದು ಸ್ಥಳೀಕರು ಹೇಳಿದಾಗ ಕ್ಯಾಮೆರಾ ಸಿದ್ಧಪಡಿಸಿಕೊಂಡು ರಸ್ತೆಯಲ್ಲಿ ಅಡ್ಡಾಡುತ್ತಿದ್ದೆವು. ಎದುರಿಗೆ ಆನೆಗಳು ಎದುರಾಗಬೇಕೆ.? ನಮ್ಮ ಕ್ಯಾಮರಾಮನ್ ಜೀವನ ಕ್ಯಾಮೆರಾ ಸಿದ್ಧಪಡಿಸಿಕೊಂಡು ಅದರ ಹಿಂದಿಂದೆ ಹೋಗುತ್ತಾ ಚಿತ್ರೀಕರಿಸಿದರು. ಆದರೆ ಅಷ್ಟರಲ್ಲಿ ಅದ್ಯಾರೋ ಒಬ್ಬ ನಮ್ಮನ್ನು ಓವರ್ ಟೇಕ್ ಮಾಡಿ ಮುಂದೆ ನುಗ್ಗಿ ಬಿಡಬೇಕೇ.. ಹಾಗೆ ಭರ್ರೆಂದು ಸಾಗಿ ಹೋದವನು, ಆನೆ ಕಂಡು ಅಷ್ಟೇ ರಭಸದಲ್ಲಿ ಬ್ರೇಕ್ ತುಳಿದಿದ್ದಾನೆ. ಆನೆಗಳು ಸ್ವಲ್ಪ ವಿಚಲಿತರಾದಂತೆ ಕಂಡು ಬಂದವು. ತನ್ನ ಸೊಂಡಿಲನ್ನು ಮೇಲೆತ್ತಿ ಒಮ್ಮೆ ಗುಟುರು ಹಾಕಿದ ಆನೆ, ನಿಧಾನಕ್ಕೆ ನಡೆಯುತ್ತಾ ರಿವರ್ಸ್ ತೆಗೆಯಲಾಗದ ಆ ವಾಹನದತ್ತ ಬಂದು ಬಿಟ್ಟಿತು. ಚಾಲಕ ನಡುಗಿ ಹೋಗಿರಬೇಕು. ಇತ್ತ ಕಡೆ ಬಾಗಿಲಿನಿಂದ ಮಹಿಳೆಯೊಬ್ಬಳು ಹೆದರಿಕೆಯಿಂದ ಬಾಗಿಲು ತೆರೆದು ಇಳಿಯಲು ಪ್ರಾರಂಭಿಸಿದಳು. ಕೇವಲ ಮೂವತ್ತು ಅಡಿ ದೂರವಿದ್ದ ನಾವು ಹಿಂದೆಯೂ ಹೋಗಲಾಗದೆ, ಮುಂದೆಯೂ ಹೋಗಲಾಗದೆ ಭಯದಿಂದ ಹಾಗೆಯೇ ನಿಂತುಬಿಟ್ಟಿದ್ದೆವು. ಈಗಾಗಲೇ ವಾಟ್ ಸ್ ಅಪ್ ನಲ್ಲಿ ನೋಡಿದ್ದ ಆನೆಯ ದೃಶ್ಯವೊಂದು ಕಣ್ಣಿಗೆ ಛಾಪಿಸಿ ನಮ್ಮನ್ನು ಮತ್ತಷ್ಟು ಅಧೀರನನ್ನಾಗಿ ಮಾಡಿಬಿಟ್ಟಿತ್ತು. ಅಕಸ್ಮಾತ್ ಆನೆ ಏನಾದರೂ ವಾಹನವನ್ನು ತಳ್ಳಿ, ಆನಂತರ ನುಗ್ಗಿದರೆ ನಾವು ಗೂಡೊಳಗೆ ಬಂದಿಯಾದ ಹಕ್ಕಿಗಳಂತೆ ಹೊರಬರಲಾರದೆ ನಜ್ಜು ಗುಜ್ಜಾಗುವ ಸಾಧ್ಯತೆ ಇದೆ. ಆದರೆ ಅದೇನು ಅದೃಷ್ಟವೋ ಏನೋ.. ಒಮ್ಮೆ ತನ್ನ ಸೊಂಡಿಲನ್ನು ಆ ವಾಹನದ ಕಿಟಕಿಯ ಒಳಗೆ ಹಾಕಿದ ಆನೆ, ಆನಂತರ ಹೊರಗೆ ತೆಗೆದುನಿಧಾನಕ್ಕೆ ತನ್ನ ಬಳಗದ ಜೊತೆಗೆ ಹೊರಟು ಹೋಯಿತು.
ನಾವು ನಿಟ್ಟುಸಿರು ಬಿಟ್ಟೆವು.
ನೀವು ಇದೆ ರಸ್ತೆಯಲ್ಲಿ ಓಡಾಡಿದರೆ ಕಾಡು ಪ್ರಾಣಿಗಳು ರಸ್ತೆಗೆ ಬರುತ್ತವೆ ಎಂದು ಸ್ಥಳೀಕರು ಹೇಳಿದಾಗ ಕ್ಯಾಮೆರಾ ಸಿದ್ಧಪಡಿಸಿಕೊಂಡು ರಸ್ತೆಯಲ್ಲಿ ಅಡ್ಡಾಡುತ್ತಿದ್ದೆವು. ಎದುರಿಗೆ ಆನೆಗಳು ಎದುರಾಗಬೇಕೆ.? ನಮ್ಮ ಕ್ಯಾಮರಾಮನ್ ಜೀವನ ಕ್ಯಾಮೆರಾ ಸಿದ್ಧಪಡಿಸಿಕೊಂಡು ಅದರ ಹಿಂದಿಂದೆ ಹೋಗುತ್ತಾ ಚಿತ್ರೀಕರಿಸಿದರು. ಆದರೆ ಅಷ್ಟರಲ್ಲಿ ಅದ್ಯಾರೋ ಒಬ್ಬ ನಮ್ಮನ್ನು ಓವರ್ ಟೇಕ್ ಮಾಡಿ ಮುಂದೆ ನುಗ್ಗಿ ಬಿಡಬೇಕೇ.. ಹಾಗೆ ಭರ್ರೆಂದು ಸಾಗಿ ಹೋದವನು, ಆನೆ ಕಂಡು ಅಷ್ಟೇ ರಭಸದಲ್ಲಿ ಬ್ರೇಕ್ ತುಳಿದಿದ್ದಾನೆ. ಆನೆಗಳು ಸ್ವಲ್ಪ ವಿಚಲಿತರಾದಂತೆ ಕಂಡು ಬಂದವು. ತನ್ನ ಸೊಂಡಿಲನ್ನು ಮೇಲೆತ್ತಿ ಒಮ್ಮೆ ಗುಟುರು ಹಾಕಿದ ಆನೆ, ನಿಧಾನಕ್ಕೆ ನಡೆಯುತ್ತಾ ರಿವರ್ಸ್ ತೆಗೆಯಲಾಗದ ಆ ವಾಹನದತ್ತ ಬಂದು ಬಿಟ್ಟಿತು. ಚಾಲಕ ನಡುಗಿ ಹೋಗಿರಬೇಕು. ಇತ್ತ ಕಡೆ ಬಾಗಿಲಿನಿಂದ ಮಹಿಳೆಯೊಬ್ಬಳು ಹೆದರಿಕೆಯಿಂದ ಬಾಗಿಲು ತೆರೆದು ಇಳಿಯಲು ಪ್ರಾರಂಭಿಸಿದಳು. ಕೇವಲ ಮೂವತ್ತು ಅಡಿ ದೂರವಿದ್ದ ನಾವು ಹಿಂದೆಯೂ ಹೋಗಲಾಗದೆ, ಮುಂದೆಯೂ ಹೋಗಲಾಗದೆ ಭಯದಿಂದ ಹಾಗೆಯೇ ನಿಂತುಬಿಟ್ಟಿದ್ದೆವು. ಈಗಾಗಲೇ ವಾಟ್ ಸ್ ಅಪ್ ನಲ್ಲಿ ನೋಡಿದ್ದ ಆನೆಯ ದೃಶ್ಯವೊಂದು ಕಣ್ಣಿಗೆ ಛಾಪಿಸಿ ನಮ್ಮನ್ನು ಮತ್ತಷ್ಟು ಅಧೀರನನ್ನಾಗಿ ಮಾಡಿಬಿಟ್ಟಿತ್ತು. ಅಕಸ್ಮಾತ್ ಆನೆ ಏನಾದರೂ ವಾಹನವನ್ನು ತಳ್ಳಿ, ಆನಂತರ ನುಗ್ಗಿದರೆ ನಾವು ಗೂಡೊಳಗೆ ಬಂದಿಯಾದ ಹಕ್ಕಿಗಳಂತೆ ಹೊರಬರಲಾರದೆ ನಜ್ಜು ಗುಜ್ಜಾಗುವ ಸಾಧ್ಯತೆ ಇದೆ. ಆದರೆ ಅದೇನು ಅದೃಷ್ಟವೋ ಏನೋ.. ಒಮ್ಮೆ ತನ್ನ ಸೊಂಡಿಲನ್ನು ಆ ವಾಹನದ ಕಿಟಕಿಯ ಒಳಗೆ ಹಾಕಿದ ಆನೆ, ಆನಂತರ ಹೊರಗೆ ತೆಗೆದುನಿಧಾನಕ್ಕೆ ತನ್ನ ಬಳಗದ ಜೊತೆಗೆ ಹೊರಟು ಹೋಯಿತು.
ನಾವು ನಿಟ್ಟುಸಿರು ಬಿಟ್ಟೆವು.
No comments:
Post a Comment